ಪ್ರಜಾಸ್ತ್ರ ಸುದ್ದಿ
ವಿಜಯಪುರ: ಹೆದ್ದಾರಿ ರಸ್ತೆ ದುರಸ್ಥಿ ಕೆಲಸ ಮಾಡ್ತಿದ್ದ ಕೂಲಿ ಕಾರ್ಮಿಕ ಮಹಿಳೆ ಮೇಲೆ ಲಾರಿ ಹಾಯ್ದ ಪರಿಣಾಮ, ಸ್ಥಳದಲ್ಲಿಯೇ ಮಹಿಳೆ ಮೃತಪಟ್ಟಿದ್ದಾಳೆ. ನಿಡಗುಂದಿ ಪಟ್ಟಣದ ಬಸ್ ನಿಲ್ದಾಣದ ಬಳಿ ಈ ಘಟನೆ ಬುಧವಾರ ನಡೆದಿದೆ.
ಮುದ್ದಾಪುರ ಗ್ರಾಮದ ಲಕ್ಷ್ಮಿಬಾಯಿ ಬಿರಾದಾರ(45) ಮೃತ ಮಹಿಳೆಯಾಗಿದ್ದಾರೆ. ಲಕ್ಷ್ಮಿಬಾಯಿ ಬಿರಾದಾರ ರಸ್ತೆ ಎಡ ಬದಿಯಲ್ಲಿ ದುರಸ್ಥಿ ಕಾರ್ಯ ಮಾಡುತ್ತಿದ್ದಳು. ಹೀಗಾಘಿ ದುರಸ್ಥಿ ಸ್ಥಳದಲ್ಲಿ ಸೂಚನಾ ಫಲಕಗಳನ್ನ ಇಡಲಾಗಿದ್ರೂ, ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗದಿಂದ ಮಹಿಳೆಯ ಮೇಲೆ ಲಾರಿ ಹಾಯ್ದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ.
ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿದ್ದ ಲಾರಿ ಚಾಲಕ ಪರಾರಿಯಾಗುತ್ತಿದ್ದ. ಪೊಲೀಸರು ಟೋಲ್ ನಾಕಾ ಬಳಿ ಲಾರಿಯೊಂದಿಗೆ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.