ಪ್ರಜಾಸ್ತ್ರ ಅಪರಾಧ ಸುದ್ದಿ
ವಿಜಯಪುರ: ಅಕ್ರಮ ಸಂಬಂಧದ ಅನುಮಾನದ ಹಿನ್ನಲೆಯಲ್ಲಿ ಇಬ್ಬರನ್ನು ಹತ್ಯೆ ಮಾಡಿದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಮಾರಡಗಿ ತಾಂಡಾದ ಹತ್ತಿರ ನಡೆದಿದೆ. ಸೋಮವಾರ ತಡರಾತ್ರಿ ಘಟನೆ ನಡೆದಿದ್ದು, ಮಂಗಳವಾರ ಮುಂಜಾನೆ ಬೆಳಕಿಗೆ ಬಂದಿದೆ.
ಗಣಿ ಗ್ರಾಮದ ಸೋಮಲಿಂಗಪ್ಪ ಕುಂಬಾರ(35) ಹಾಗೂ ಪಾರ್ವತಿ ತಳವಾರ(38) ಕೊಲೆಯಾದವರು. ಗ್ರಾಮಕ್ಕೆ ಬರುವ ಮೊದಲೇ ರಸ್ತೆ ಮಧ್ಯದಲ್ಲಿ ಕೊಲೆ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ? ಅಕ್ರಮ ಸಂಬಂಧದ ಶಂಕೆಗೆ ಕೊಲೆ ನಡೆದಿದ್ದಾ? ಬೇರೆ ಏನಾದರೂ ಕಾರಣ ಇರಬಹುದಾ ಅನ್ನೋದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.