ನವದೆಹಲಿ: ರಾಜ್ಯಸಭೆಯಲ್ಲಿ ಮಂಡನೆಯಾದ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ವಿಚಾರ, ಪರ-ವಿರೋಧಗಳಿಗೆ ದಾರಿ ಮಾಡಿಕೊಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ ಶಾ 370 ಮತ್ತು 35ಎ ವಿಧಿಯನ್ನ ರದ್ದು ಮಾಡುವ ಕುರಿತು ಅನುಮೋದನೆ ಮಂಡಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪಿಡಿಪಿ ಸಂಸದ ಸಂವಿಧಾನದ ಪ್ರತಿ ಹರಿದು ಹಾಕಿದ್ರು.
ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಸಂಸದ ಮಿರ್ ಅಹ್ಮದ್ ಫಯಾಜ್ ತಮ್ಮ ಕೈಯಲ್ಲಿದ್ದ ಸಂವಿಧಾನದ ಪ್ರತಿ ಹರಿದು ಹಾಕುವ ಮೂಲಕ ಬಹುದೊಡ್ಡ ಪ್ರಮಾಧವನ್ನ ಎಸಗಿದ್ದಾರೆ. ಇದ್ರಿಂದಾಗಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನ ಹೊರಗೆ ಹೋಗುವಂತೆ ಸೂಚಿಸಿದ್ರು. ಇದಾದ ಬಳಿಕ ಪಿಡಿಪಿ ಮತ್ತೊಬ್ಬ ಸಂಸದ ನಾಜಿರ್ ಅಹ್ಮದ್, ತಮ್ಮ ಬಟ್ಟೆಯನ್ನ ಹರಿದುಕೊಂಡು ಪುಂಡಾಟ ಪ್ರದರ್ಶನ ನಡೆಸಿದ್ರು.