ಮುಂಬೈ: ಇಂದು ಪ್ರಧಾನಿ ಮೋದಿ ಲಾಕ್ ಡೌನ್ ಮುಂದುವರೆಸಿರುವ ನಡುವೆಯೇ ಇಂದು ಮುಂಬೈನಲ್ಲಿ ಪ್ರತಿಭಟನೆ ಮಾಡಲಾಗಿದೆ. ಕಳೆದೊಂದು ತಿಂಗಳಿನಿಂದ ನಮ್ಗೆ ಕೆಲಸವಿಲ್ಲ. ಸರಿಯಾಗಿ ಊಟ ಸಿಗ್ತಿಲ್ಲ. ಇಲ್ಲಿನ ಸರ್ಕಾರ ನಮ್ಗೆ ಯಾವುದೇ ವ್ಯವಸ್ಥೆ ಮಾಡಿಲ್ಲವೆಂದು ಮುಂಬೈನ ಬಾಂದ್ರಾದಲ್ಲಿ ಪ್ರತಿಭಟನೆ ಮಾಡಲಾಗಿದೆ.
ದೇಶದಲ್ಲಿ ಅತೀ ಕರೋನಾ ಪಿಡೀತರು ಹಾಗೂ ಸಾವಿನ ಸಂಖ್ಯೆ ಹೆಚ್ಚಿರುವುದು ಮಹಾರಾಷ್ಟ್ರದಲ್ಲಿಯೇ. ಹೀಗಿರುವಾಗಿ ಇಲ್ಲಿ ಏಕಕಾಲದಲ್ಲಿ ನೂರಾರು ಜನ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ರ ಎದುರು ಬಂದ ನೂರಾರು ಕಾರ್ಮಿಕರು, ನಮ್ಗೆ ತಿಂಗಳಿನಿಂದ ಕೆಲಸವೂ ಇಲ್ಲ. ಊಟವೂ ಇಲ್ಲ. ಸರ್ಕಾರ ನಮ್ಗೆ ಏನೂ ಕೊಟ್ಟಿಲ್ಲ. ನಮ್ಗೆ ನಮ್ಮ ಊರಿಗೆ ಹೋಗಲಾದ್ರು ಬಿಡಿಯೆಂದು ಹೇಳಿ ಪ್ರತಿಭಟನೆ ನಡೆಸಿದ್ರು.
ಕಣ್ಣೀರಿಟ್ಟು ತಮ್ಮ ಗೋಳು ಹೇಳಿಕೊಂಡ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡುವ ಹೊತ್ತಿನಲ್ಲಿ ನೂಕುನುಗ್ಗಲು ಆಗಿದೆ. ಆಗ ಪೊಲೀಸ್ರು ಲಾಠಿ ಚಾರ್ಜ್ ನಡೆಸಿದ್ದಾರೆ.