ಪ್ರಜಾಸ್ತ್ರ ಸುದ್ದಿ
ಕುಮಟಾ: ತನ್ನ ಬೇಟೆಗೆಂದು ಊರಿಗೆ ಬಂದ ಚಿರತೆಯೊಂದು ನಾಯಿಯ ಪಂಜರದಲ್ಲಿ ಸಿಲುಕಿಹಾಕಿಕೊಂಡ ಘಟನೆ ತಾಲೂಕಿನ ವಿಷ್ಣು ನಾಗಪ್ಪ ಹರಿಕಾಂತ್ ಎಂಬುವವರ ಮನೆಯ ಮುಂದೆ ನಡೆದಿದೆ.
ಕಿಮಾನಿಯಲ್ಲಿರುವ ವಿಷ್ಟು ಅವರ ಮನೆ ಮುಂದಿನ ನಾಯಿ ಪಂಜರಕ್ಕೆ ಚಿರತೆ ನುಗ್ಗಿದೆ. ಅಲ್ಲಿಂದ ನಾಯಿ ಮರಿ ಅಂಜಿ ಜೋರಾಗಿ ಚೀರಾಡಲು ಶುರು ಮಾಡಿದೆ. ಆಗ ಮನೆಯವರು ಬಂದು ನೋಡಿದರೆ ಚಿರತೆ ಒಳಗೆ ಇರುವುದು ಕಾಣಿಸಿದೆ. ಮನೆಯವರ ಧೈರ್ಯ ಮಾಡಿ ಕಬ್ಬಿಣದ ಸಲಾಕೆಯಿಂದ ಪಂಜರದ ಬಾಗಿಲು ಮುಚ್ಚಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ಜನರನ್ನು ನೋಡಿದ ಚಿರತೆ ಒಂದು ಮೂಲೆಯಲ್ಲಿ ಕುಳಿತಿದೆ. ಅತ್ತ ನಾಯಿ ಮರಿ ಇನ್ನೊಂದು ಮೂಲೆಯಲ್ಲಿ ಕುಳಿತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದು ಚಿರತೆಯನ್ನು ಸುರಕ್ಷಿತವಾಗಿ ಸರೆ ಹಿಡಿದು ಸ್ಥಳಾಂತರ ಮಾಡಿದ್ದಾರೆ.