ಪ್ರಜಾಸ್ತ್ರ ಸುದ್ದಿ
ತುಮಕೂರು: ಇತ್ತೀಚೆಗೆ ಎಲ್ಲೆಡೆ ಹುಲಿ, ಚಿರತೆಗಳ ಹಾವಳಿ ಹೆಚ್ಚಾಗುತ್ತಿವೆ. ಇದರಿಂದಾಗಿ ಜನರು ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಅನೇಕ ಜೀವಗಳು ಸಹ ಬಲಿಯಾಗಿವೆ. ಈಗ ಜಿಲ್ಲೆಯ ದೇವರಾಯ ಪಟ್ಟಣದ ಸುತ್ತಮುತ್ತ ಚಿರತೆಯೊಂದು ಪ್ರತ್ಯಕ್ಷವಾಗಿದೆ.
ಸಿಸಿ ಟಿವಿಯಲ್ಲೂ ಚಿರತೆ ಓಡಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಇದರಿಂದಾಗಿ ಸುತ್ತಮುತ್ತಲಿನ ಜನರಲ್ಲಿ ಭಯ ಹೆಚ್ಚಾಗಿದೆ. ಇದರಿಂದಾಗಿ ಮನೆಯಿಂದ ಹೊರ ಬರದಂತಾಗಿದೆ. ಈ ಘಟನೆಗೆ ಪುಷ್ಟಿ ನೀಡುವಂತೆ ಕಳೆದ ಒಂದು ತಿಂಗಳಲ್ಲಿ 5 ಬೀದಿ ನಾಯಿಗಳು ಚಿರತೆಗೆ ಬಲಿಯಾಗಿವೆ. ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಜನರು ಆಗ್ರಹಿಸಿದ್ದಾರೆ.