ಪ್ರಜಾಸ್ತ್ರ ಸುದ್ದಿ
ಮೈಸೂರು: ಕಾಲೇಜಿನಲ್ಲಿದ್ದಾಗ ಮೂಡಿದ ಪ್ರೀತಿ ಮುಂದೆ ಅದು ಲಿವಿಂಗ್ ಟಿಗೆದರ್ ತನಕ ಬಂದು ತಲುಪಿತು. ಆ ಸಂಬಂಧದಿಂದ ಮಗುವೊಂದು ಜನಿಸಿದೆ. ಈಗ ಆ ಮಗು ಇಬ್ಬರಿಗೂ ಬೇಡವಾಗಿದ್ದು, ಅನಾಥಾಶ್ರಮ ಸೇರಿದೆ.
ಇಂತಹದೊಂದು ಘಟನೆ ಮೈಸೂರಿನಲ್ಲಿ ನಡೆದಿದೆ. ಇಬ್ಬರಿಗೂ 11 ದಿನದ ಮಗು ಬೇಡವಾಗಿದೆ. ಇದು ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ನಂತರ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಅವರು ವಿಚಾರಿಸಿ ಇಬ್ಬರು ಮೇಜರ್ ಇದ್ದೀರಿ. ಮದುವೆಯಾಗಿ ಮಗು ಸಾಕಬಹುದಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಅವರು ಸಾಧ್ಯವೇ ಇಲ್ಲವೆಂದಿದ್ದಾರೆ.
ಇದೀಗ ಈ ಮಗು ಚಾಮರಾಜನಗರದ ಜೀವನ ಜ್ಯೋತಿ ಟ್ರಸ್ಟ್ ನ ಅನಾಥಾಶ್ರಮಕ್ಕೆ ನೀಡಲಾಗಿದೆ. 2 ತಿಂಗಳೊಳಗೆ ಮನಸ್ಸು ಬದಲಿಸಿ ಬಂದರೆ ಮಗು ಕೊಡುವುದಾಗಿ ಹೇಳಿದ್ದಾರೆ. ಇವರ ಪ್ರೀತಿ ಬರೀ ದೈಹಿಕ ಸಂಬಂಧಕ್ಕೆ ಮಾತ್ರ ಸಿಮೀತವಾಗಿರುವುದು ನಿಜಕ್ಕೂ ದುರಂತ.