ಬೆಳಗ್ಗಿನ 4 ಗಂಟೆ ದುರ್ಬಳಕೆ ಆಗ್ತಿದ್ಯಾ? ಕೋವಿಡ್ ಮಾರ್ಗಸೂಚಿಗಿಲ್ಲ ಕಿಮ್ಮತ್ತು..!

272

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೇ 12ರ ತನಕ ಅಂದ್ರೆ 14 ದಿನಗಳ ಲಾಕ್ ಡೌನ್ ಘೋಷಿಸಿದೆ. ಜನರಿಗೆ ತೊಂದರೆಯಾಗಬಾರದೆಂದು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಆದ್ರೆ, ಈ ಸಮಯ ದುರ್ಬಳಕೆ ಆಗ್ತಿದ್ಯಾ ಅನ್ನೋ ಅನುಮಾನ ಮೂಡಿದೆ.

ಈ ಬೆಳಗ್ಗಿನ 4 ಗಂಟೆಯ ಅವಧಿಯಲ್ಲಿ ಜನರು ಸಾಮಾಜಿಕ ಅಂತರವನ್ನ ಸಂಪೂರ್ಣವಾಗಿ ಮರೆಯುತ್ತಿದ್ದಾರೆ. ಮಾಸ್ಕ್ ಸರಿಯಾಗಿ ಧರಿಸುತ್ತಿಲ್ಲ. ಸ್ಯಾನ್ ಟೈಸರ್ ಮಾಡಿಕೊಳ್ಳುತ್ತಿಲ್ಲ. ವ್ಯಾಪಾರಸ್ಥರು ಹಾಗೂ ಗಿರಾಕಿಗಳು ಸಂಪೂರ್ಣವಾಗಿ ಕೋವಿಡ್ ಮಾರ್ಗಸೂಚಿಗಳನ್ನ ಮರೆಯುತ್ತಿದ್ದಾರೆ. ಹೀಗಾಗಿಯೇ ಕರೋನಾ ಕಂಟ್ರೋಲ್ ಗೆ ಪೆಟ್ಟು ಬೀಳುತ್ತಿದೆ ಎಂದ್ರೆ ತಪ್ಪಿಲ್ಲ ಎನಿಸುತ್ತೆ.

ತರಕಾರಿ, ಕಿರಾಣಿ, ಹಾಲು, ಮೊಸರು, ಮದ್ಯ ಸೇರಿದಂತೆ ಸರ್ಕಾರ ಅವಕಾಶ ನೀಡಿರುವ ಸೇವೆಗಳನ್ನ ಪಡೆಯುವ ಸಂದರ್ಭದಲ್ಲಿ ಜನರು ಕರೋನಾ ಇರುವುದನ್ನೆ ಮರೆತು ವರ್ತಿಸ್ತಿದ್ದಾರೆ. ನಾಳೆ ಏನೂ ಸಿಗುವುದಲ್ಲವೇನೋ ಅನ್ನೋ ರೀತಿ ವರ್ತನೆ ಮಾಡ್ತಿದ್ದಾರೆ. ಇದರ ಪರಿಣಾಮ ಶುಕ್ರವಾರ ಬರೋಬ್ಬರಿ 48.296 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಜನರು ಎಚ್ಚೆತ್ತುಕೊಳ್ಳುವುದು ತುಂಬಾ ಮುಖ್ಯವಿದೆ.




Leave a Reply

Your email address will not be published. Required fields are marked *

error: Content is protected !!