ನವದೆಹಲಿ: ಕರೋನಾ ವೈರಸ್ ನಿಂದ ರಾಷ್ಟ್ರ ರಾಜಧಾನಿ ಸಹ ಸಾಕಷ್ಟು ಹೈರಾಣಗಿದೆ. ದೆಹಲಿಯಲ್ಲಿ ಸಹ ಅತೀ ಸೋಂಕು ಪತ್ತೆಯಾಗಿವೆ. ಹೀಗಾಗಿ ಇಡೀ ರಾಜ್ಯ ಲಾಕ್ ಡೌನ್ ಹಾಗೂ ಸೀಲ್ ಡೌನ್ ಪರಿಸ್ಥಿತಿಯಲ್ಲಿದೆ. ಇದರಿಂದಾಗಿ ಪ್ರತಿಯೊಂದು ಇಲಾಖೆಯೂ ಬಂದ್ ಆಗಿವೆ. ಇದರ ನಡುವೆ ದಿಲ್ಲಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಖಾಸಗಿ ಶಾಲೆಗಳು ಶುಲ್ಕು ಕೇಳುವಂತಿಲ್ಲವೆಂದು ಹೇಳಲಾಗಿದೆ. 3 ತಿಂಗಳು ಶುಲ್ಕವನ್ನ ಕೇಳುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಮೇ 3ರ ತನಕ ಲಾಕ್ ಡೌನ್ ಇದ್ದು, ಶುಲ್ಕ ಕಟ್ಟದ ಮಕ್ಕಳನ್ನ ಹೊರಗೆ ಹಾಕುವಂತಿಲ್ಲ. ಶುಲ್ಕ ಹೆಚ್ಚಳ ಮಾಡುವಂತಿಲ್ಲವೆಂದು ಖಡಕ್ ಆಗಿ ಆದೇಶಿಸಿದೆ.
ಒಂದು ವೇಳೆ ಈ ಆದೇಶವನ್ನ ಉಲ್ಲಂಘನೆ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.