ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇವತ್ತು ಲಾಕ್ ಡೌನ್ ಮುಗಿಯಬೇಕಿತ್ತು. ಆದ್ರೆ, ಕರೋನಾ ಸೋಂಕು ಇನ್ನಷ್ಟು ಕಡಿಮೆಯಾಗಬೇಕಾದ ಹಿನ್ನೆಲೆಯಲ್ಲಿ ಒಂದು ವಾರ ಮುಂದುವರೆಸಲಾಗಿದೆ. ಆದ್ರೆ, ಒಂದಿಷ್ಟು ಸಡಿಲಿಕೆ ನೀಡಲಾಗಿದೆ.
ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗೆ ಬೆಳಗ್ಗೆ 10 ಗಂಟೆಯ ತನಕ ಅವಕಾಶವಿತ್ತು. ಅದು ಇಂದಿನಿಂದ ಒಂದು ವಾರ ಮಧ್ಯಾಹ್ನ 2 ಗಂಟೆಯ ತನಕ ಅವಕಾಶ ನೀಡಲಾಗಿದೆ. ಶೇಕಡ 50ರಷ್ಟು ಸಿಬ್ಬಂದಿಯ ಜೊತೆಗೆ ಗಾರ್ಮಿಂಟ್ಸ್ ಓಪನ್ ಮಾಡಬಹುದು. ಆಟೋ, ಟ್ಯಾಕ್ಸಿಯಲ್ಲಿ ಇಬ್ಬರು ಪ್ರಯಾಣಿಕರನ್ನ ಕರೆದುಕೊಂಡು ಹೋಗಬಹುದು.
ಹೀಗೆ ಒಂದಿಷ್ಟು ಸಡಿಲಿಕೆ ಮಾಡಿರುವ ಸರ್ಕಾರ, ರಾಜ್ಯದ 8 ಜಿಲ್ಲೆಗಳಲ್ಲಿ ಯತಾಸ್ಥಿತಿ ಮುಂದುವರೆಸಿಕೊಂಡು ಹೋಗಲಾಗಿದೆ. ಯಾಕಂದ್ರೆ, ಈ ಜಿಲ್ಲೆಗಳಲ್ಲಿ ಇನ್ನು ಕರೋನಾ ನಿಯಂತ್ರಣಕ್ಕ ಬರಬೇಕಿದ್ದು, ಹೀಗಾಗಿ ಉಳಿದ ಜಿಲ್ಲೆಗಳಿಗೆ ನೀಡಿದ ಸಡಿಲಿಕೆ ಈ 8 ಜಿಲ್ಲೆಗಳಿಗೆ ನೀಡಿಲ್ಲ. ಅಲ್ಲಿ ಇನ್ನಷ್ಟು ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.