ಪ್ರಜಾಸ್ತ್ರ ಸುದ್ದಿ
ಮುಂಬೈ: ಮಹಾರಾಷ್ಟ್ರ ಮಾಜಿ ಸಿಎಂ ಶಿವಾಜಿರಾವ ಪಾಟೀಲ ನೀಲಂಗೆಕರ್ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. 89 ವರ್ಷ ಶಿವಾಜಿರಾವ, ಕರೋನಾಗೆ ತುತ್ತಾಗಿದ್ರು. ಬಳಿಕ ಅದರಿಂದ ಗುಣಮುಖ ಸಹ ಆಗಿದ್ರು. ಆದ್ರೆ, ಅವರು ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮರಾಠವಾಡ ಪ್ರದೇಶದ ಲಾತೂರನ ಹಿರಿಯ ಕಾಂಗ್ರೆಸ್ ನಾಯಕ ಶಿವಾಜಿರಾವ ಪಾಟೀಲ ನೀಲಂಗೆಕರ್ ಅವರು, ಜೂನ್ 1985ರಿಂದ ಮಾರ್ಚ್ 1986ರವರೆಗೂ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. 1985ರಲ್ಲಿ ನಡೆದ ಎಂಡಿ ಪರೀಕ್ಷೆ ರಿಸಲ್ಟ್ ವಿಚಾರದ ವಂಚನೆ ಪ್ರಕರಣದ ಆರೋಪ ಕೇಳಿ ಬಂದಿತು. ಹೀಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ರು.
ಮಾಜಿ ಸಿಎಂ ನಿಧನಕ್ಕೆ ಸಿಎಂ ಉದ್ಭವ್ ಠಾಕ್ರೆ ಸೇರಿದಂತೆ ರಾಜಕೀಯ ಗಣ್ಯರು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.