ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ತಿರುವನಂತಪುರ: ಖ್ಯಾತ ಮಲಯಾಳಂ ಕವಿ ವಿಷ್ಣು ನಾರಾಯಣನ್ ನಂಬೂದರಿ(81) ಗುರುವಾರ ನಿಧನರಾದ್ರು. ಶ್ರೀ ಚಿತ್ರಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮಲಯಾಳಂ ಸಾಹಿತ್ಯದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಇವರಿಗೆ 2014ರಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಯ್ತು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಕೇರಳದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.
ಭೂಮಿ ಗೀತಗಂಗಲ್, ಪಿತ್ರಯನಂ, ಅಪರಾಜಿತಾ, ಎಣ್ಣಾ ವಿಕಾರಂ, ಮುಖಂ ಎವಿಡೆ ಸೇರಿದಂತೆ ಹಲವು ಪ್ರಸಿದ್ಧ ಕೃತಿಗಳನ್ನ ರಚನೆ ಮಾಡಿದ್ದಾರೆ. ಹಿರಿಯ ಕವಿಯ ನಿಧನಕ್ಕೆ ಎಲ್ಲಡೆಯಿಂದ ಸಾಂತಪ ವ್ಯಕ್ತವಾಗಿದೆ.