ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಇದೀಗ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ. ಕನ್ನಡಪರ ಸಂಘಟನೆಗಳಿಂದ ಹಿಡಿದು, ಸೋಷಿಯಲ್ ಮೀಡಿಯಾದಲ್ಲಿಯೂ ಭರ್ಜರಿ ವಾಗ್ದಾಳಿ ನಡೆದಿದೆ. ಕಾರಣ, ಕರ್ನಾಟಕದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಸ್ತು ಎಂದಿರುವುದಕ್ಕೆ.
ಕನ್ನಡಿಗರ ವಿರುದ್ಧ ಸದಾ ವಾಗ್ದಾಳಿ ಮಾಡುತ್ತಾ, ಕಾಲು ಕೆದರಿಕೊಂಡು ಗಡಿ ಭಾಗಗಳಲ್ಲಿ ಜಗಳ ಮಾಡುತ್ತಲೇ ಬರ್ತಿರುವ ಮರಾಠಿಗರ ಪರವಾಗಿ ಸಿಎಂ ಇದೀಗ ನಿಂತುಕೊಂಡಿದ್ದಾರೆ. ರಾಜ್ಯದಲ್ಲಿ ಮರಾಠಿಗರ ಸಮುದಾಯ ಹೆಚ್ಚಾಗಿದೆ. ಹೀಗಾಗಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಹಾಗೂ 50 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಸಹಿ ಹಾಕಿದ್ದಾರೆ.
ಬಿಎಸ್ವೈ ಈ ನಿರ್ಧಾರದ ಹಿಂದೆ ಪುತ್ರ ವಿಜಯೇಂದ್ರನ ವ್ಯಾಮೋಹವಿದೆ. ಕನ್ನಡಿಗರನ್ನ, ಕನ್ನಡತನವನ್ನ ಮಗನಿಗಾಗಿ ಬಲಿಕೊಟ್ಟು ಮರಾಠಿಗರ ಮುಂದೆ ಮಂಡಿಯೂರುವಂತೆ ಮಾಡ್ತಿದ್ದಾರೆ. ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆಗೆ ಒತ್ತಡ ಹೆಚ್ಚಿದ್ದು, ಅಲ್ಲಿ ಲಿಂಗಾಯತರು ಹಾಗೂ ಮರಾಠಿಗರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಹೀಗಾಗಿ ಮಗನ ರಾಜಕೀಯ ಭವಿಷ್ಯಕ್ಕಾಗಿ ಇಡೀ ನಾಡಿನ ಜನರ ಗೌರವ, ಅಸ್ಮಿತೆಯನ್ನ ಮಾರಾಟ ಮಾಡಲು ಹೊರಟಿದ್ದಾರೆ ಅನ್ನೋ ಆಕ್ರೋಶ ವ್ಯಕ್ತವಾಗಿದೆ. ಜನರು ಬೀದಿಗಿಳಿಯುವ ಮೊದ್ಲೇ ಬಿಎಸ್ವೈ ಅವರು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಉದ್ದೇಶದಿಂದ ಹಿಂದೆ ಸರಿಯಬೇಕಿದೆ.