ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಜೆಟ್ ಮಂಡನೆ ಬಳಿಕ ಮಾತನಾಡಿದ ಬಿಜೆಪಿ ಮಾಜಿ ಸಿಎಂ ಬೊಮ್ಮಾಯಿ ಅವರು, ಕಾಂಗ್ರೆಸ್ ಪ್ರಣಾಳಿಕೆ, ರಾಜ್ಯಪಾಲರಿಂದ ಹೇಳಿಸಿದ ಮಾತುಗಳು ಹಾಗೂ ಈಗಿನ ಬಜೆಟ್ ನೋಡಿದರೆ ಇದೊಂದು ಸುಳ್ಳಿನ ಸರ್ಕಾರ ಅನ್ನೋದು ಗೊತ್ತಾಗುತ್ತೆ ಅಂತಾ ವಾಗ್ದಾಳಿ ನಡೆಸಿದರು.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ವಹಣೆ ಮಾಡಿದ್ದನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಆಗ ಆರ್ಥಿಕ ಸ್ಥಿತಿ ಇತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ಕೇಂದ್ರ ಸರ್ಕಾರ ಯಾವುದೇ ಯೋಜನೆಗಳಿಗೆ ಅನುದಾನ ಕಡಿಮೆ ಮಾಡಿಲ್ಲ. ಎರಡು ಹಂತದಲ್ಲಿ ಕೊಡುತ್ತೆ. ಇದ್ಯಾವುದೂ ಲೆಕ್ಕ ತೆಗೆದುಕೊಂಡಿಲ್ಲ.
ಈ ಬಜೆಟ್ ನೋಡಿದರೆ 50 ಪ್ಯಾರಾಗ್ರಾಫ್ ನಲ್ಲಿ ಟೀಕೆ ಮಾಡುವುದೇ ಹೆಚ್ಚಿದೆ. ಹಣಕಾಸು ನಿರ್ವಹಣೆ ಹೇಗೆ ಮಾಡುತ್ತಾರೆ ಅನ್ನೋದು ಹೇಳಿಲ್ಲ. ಗ್ಯಾರೆಂಟಿಗಳಿಗೆ 52 ಸಾವಿರ ಕೋಟಿ ಬೇಕು ಅಂತಾರೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಇನ್ನು ಜಾರಿ ಆಗಿಲ್ಲ. ಈ ವರ್ಷಕ್ಕೆ 20, 25 ಸಾವಿರ ಕೋಟಿ ಸಾಕಾಗುತ್ತೆ ಅಂತಾ ಹೇಳಿದ್ದೆ. ಆದರೆ, ಇವರು 52 ಸಾವಿರ ಕೋಟಿ ಅಂತಿದ್ದಾರೆ. ಹೀಗಾಗಿ ಹೆಚ್ಚಿನ ತೆರಿಗೆ ಹಾಕುವ ಅವಶ್ಯಕತೆ ಇರಲಿಲ್ಲ ಅಂತಾ ಬೊಮ್ಮಾಯಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.