ಪ್ರಜಾಸ್ತ್ರ ಸುದ್ದಿ
ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯನವರ 2023ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ಇಲಾಖೆವಾರು ನೋಡಿದರೆ ಯಾವ ಇಲಾಖೆಗೆ ಎಷ್ಟು ಅನುದಾನ ನೀಡಿದ್ದಾರೆ ಅನ್ನೋದರ ವಿವಿರ ಇಲ್ಲಿದೆ.
ಗ್ರಾಮೀಣಾಭಿವೃದ್ಧಿಗೆ 18 ಸಾವಿರ ಕೋಟಿ
ಆರೋಗ್ಯ ಇಲಾಖೆಗೆ 14 ಸಾವಿರ ಕೋಟಿ
ಶಿಕ್ಷಣ ಇಲಾಖೆಗೆ 37 ಸಾವಿರ ಕೋಟಿ
ಸಮಾಜ ಕಲ್ಯಾಣ ಇಲಾಖೆಗೆ 111 ಸಾವಿರ ಕೋಟಿ
ನೀರಾವರಿಗೆ ಇಲಾಖೆಗೆ 19 ಸಾವಿರ ಕೋಟಿ
ಕೃಷಿ ಇಲಾಖೆಗೆ 5,860 ಕೋಟಿ
ಇಂಧನ ಇಲಾಖೆಗೆ 22 ಸಾವಿರ ಕೋಟಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24 ಸಾವಿರ ಕೋಟಿ
ಕಂದಾಯ ಇಲಾಖೆಗೆ 16 ಸಾವಿರ ಕೋಟಿ
ಲೋಕೋಪಯೋಗಿ ಇಲಾಖೆಗೆ 10 ಸಾವಿರ ಕೋಟಿ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 30,24 ಕೋಟಿ
ಇತರೆ 1.09 ಲಕ್ಷ ಕೋಟಿ ರೂಪಾಯಿ
ಹೀಗೆ ಇಲಾಖಾವಾರು ಬಜೆಟ್ ನಲ್ಲಿ ನೀಡಿರುವ ಅನುದಾನದ ವಿವರವಾಗಿದೆ. ಇನ್ನು ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಯೋಜನೆ ಘೋಷಣೆ. ಹೀಗಾಗಿ 45 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಇಂದಿರ ಕ್ಯಾಂಟೀನ್ 100 ಕೋಟಿ ರೂಪಾಯಿ ನೀಡಲಾಗಿದೆ.
ಇನ್ನು ಖ್ಯಾತ ಸಂಶೋಧಕ ದಿವಂಗತ ಡಾ.ಎಂ.ಎಂ ಕಲಬುರ್ಗಿ ಅವರ ಹೆಸರಿನಲ್ಲಿ ಪ್ರತಿಷ್ಠಾಪನೆ ಸ್ಥಾಪನೆ, ಖ್ಯಾತ ಸಾಹಿತಿ ದಿವಂಗತ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಅಕಾಡಮಿ ಮೂಲಕ ಅವರ ಸಾಹಿತ್ಯ, ಪರಿಸರ ಚಟುವಟಿಕೆಗಾಗಿ 2 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.
ಇನ್ನು ಸರ್ಕಾರದ ಪ್ರಮುಖವಾದ ಐದು ಗ್ಯಾರೆಂಟಿ ಯೋಜನೆಗಳಿಗೆ ವಾರ್ಷಿಕ 52 ಸಾವಿರ ಕೋಟಿ ಅವಶ್ಯಕವಿದೆ. ಇದರಿಂದ1.03 ಕೋಟಿ ಜನರು ಉಪಯೋಗವಾಗಲಿದೆ.
ಗೃಹಜ್ಯೋತಿ- 13,910 ಕೋಟಿ
ಅನ್ನಭಾಗ್ಯ-10 ಸಾವಿರ ಕೋಟಿ
ಗೃಹಲಕ್ಷ್ಮಿ 30 ಸಾವಿರ ಕೋಟಿ
ನಾರಿಶಕ್ತಿ- 4 ಸಾವಿರ ಕೋಟಿ