ಪ್ರಜಾಸ್ತ್ರ ಸುದ್ದಿ
ಧನ್ಬಾದ್: ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು 14 ಜನರು ಪ್ರಾಣ ಕಳೆದುಕೊಂಡಿರುವ ಘಟನೆ ಜಾರ್ಖಂಡ್ ನ ಧನ್ಬಾದ್ ದಲ್ಲಿ ನಡೆದಿದೆ. ಆಶೀರ್ವಾದ್ ಟವರ್ ಜೋರಪಟಕ್ ಪ್ರದೇಶದಲ್ಲಿ ಈ ಅನಾಹುತ ನಡೆದಿದೆ. ಮಂಗಳವಾರ ಸಂಜೆ ಬೆಂಕಿ ಅನಾಹುತ ನಡೆದಿದೆ.
14 ಜನರು ಮೃತಪಟ್ಟಿದ್ದು 11 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಕ್ಕಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 40 ಅಗ್ನಿ ಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸಲಾಗಿದೆ. ಜಿಲ್ಲಾಧಿಕಾರಿ ಸಂದೀಪ್ ಸಿಂಗ್ ಅವರಿಗೆ ಉಸ್ತುವಾರಿ ವಹಿಸಲಾಗಿದೆ. ಈ ಕುರಿತು ಖುದ್ದು ಪರಿಶೀಲನೆ ನಡೆಸಲಿದ್ದೇನೆ ಎಂದು ಮುಖ್ಯಮಂತ್ರಿ ಸೂರೇನ್ ಟ್ವೀಟ್ ಮಾಡಿದ್ದಾರೆ.