ಟಿ-20 ಸರಣಿ ಕೈವಶ ತವಕದಲ್ಲಿ ಟೀಂ ಇಂಡಿಯಾ

205

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಇಲ್ಲಿನ ಸರ್ದಾರ್ ವಲ್ಲಾಭಾಯಿ ಪಟೇಳ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 3ನೇ ಹಾಗೂ ಕೊನೆಯ ಟಿ-20 ಪಂದ್ಯ ಆಡಲಿದೆ. 3 ಪಂದ್ಯಗಳ ಸರಣಿಯಲ್ಲಿ ಈಗಾಗ್ಲೇ 1-1 ಸಮಬಲ ಸಾಧಿಸಿವೆ. ಹೀಗಾಗಿ ಬುಧವಾರದ ಪಂದ್ಯ ಕುತೂಹಲ ಮೂಡಿಸಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗಾಗ್ಲೇ ಏಕದಿನ ಸರಣಿ ಗೆದ್ದಿರುವ ಭಾರತ ಟಿ-20 ಸರಣಿ ಗೆದ್ದು ಬೀಗಬೇಕು ಎಂದುಕೊಂಡಿದೆ. ಟಿ-20 ಸರಣಿಗೆ ಹಿರಿಯ ಆಟಗಾರರಾದ ಕೊಹ್ಲಿ, ಶರ್ಮಾ, ಅಶ್ವಿನ್ ಸೇರಿ ಅನೇಕರಿಗೆ ವಿರಾಮ ನೀಡಲಾಗಿದೆ. ಕೆ.ಎಲ್ ರಾಹುಲ್ ಮದುವೆ ಮೂಡ್ ನಲ್ಲಿದ್ದಾನೆ. ಸಂಜೆ 7ಕ್ಕೆ ಪಂದ್ಯ ಶುರುವಾಗಲಿದೆ.




Leave a Reply

Your email address will not be published. Required fields are marked *

error: Content is protected !!