‘ನಮೋ’ಗೆ ಗಂಗೆಯಿಂದ ಶಿಕ್ಷೆ..

508

 ವಾರಣಾಸಿ : ಪ್ರಧಾನಿ ಮೋದಿಗೆ ಗಂಗೆ ಶಿಕ್ಷೆ ಕೊಡುತ್ತಾಳೆ ಅಂತಾ ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದ್ದಾರೆ. ಪ್ರಧಾನಿ ಮೋದಿ ನೀಡಿದ ಯಾವ ಭರವಸೆಗಳನ್ನು ಅವರು ಈಡೇರಿಸಲ್ಲ. ಅದು ಅಲ್ಲದೇ, ಅವರು ಗಂಗಾ ನದಿಯನ್ನ ಶುದ್ಧೀಕರಣಗೊಳಿಸುವುದಾಗಿ ಹೇಳಿದ್ದರು. ಆದರೆ, ಅವರಿಂದ ಈ ಕಾರ್ಯ ಮಾಡಲಾಗಲಿಲ್ಲ. ಹೀಗಾಗಿ ಗಂಗೆ ಅವರಿಗೆ ಸರಿಯಾದ ಶಿಕ್ಷೆ ಕೊಡುತ್ತಾಳೆ ಅಂತಾ ಹೇಳಿದ್ದಾರೆ.

ಬಿಎಸ್ಪಿ ನಾಯಕಿ ಮಾಯಾವತಿ

ವಾರಣಾಸಿಯಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಜೊತೆಯಾಗಿ ನಡೆಸಿದ ರ್ಯಾಲಿ ವೇಳೆ ಮಾತ್ನಾಡಿದ ಮಾಯಾವತಿ, ಗಂಗಾ ನದಿ ಶುದ್ಧೀಕರಣಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಷ್ಟು ಮಾತ್ರವಲ್ಲ, 2014ರಲ್ಲಿ ಅವರು ನೀಡಿದ ಯಾವ ಭರವಸೆಗಳನ್ನು ಈಡೇರಿಸಲ್ಲ. ಹೀಗಾಗಿ ದೇಶದ ಜನತೆ ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಅಂತಾ ವಾಗ್ದಾಳಿ ನಡೆಸಿದರು.




Leave a Reply

Your email address will not be published. Required fields are marked *

error: Content is protected !!