ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೋವಿಡ್ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ವತಿಯಿಂದ ಮೇಕೆದಾಟು ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ವಿರುದ್ಧ ಹೈಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ವಿಚಾರಣೆ ನಡೆದು ಸರ್ಕಾರ ಹಾಗೂ ಕಾಂಗ್ರೆಸ್ ಗೆ ಸೂಚನೆ ನೀಡಲಾಗಿದೆ. ಹೀಗಾಗಿ ಕಾಂಗ್ರೆಸ್ ಇಂದು ಸಭೆಯನ್ನು ನಡೆಸುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪಾದಯಾತ್ರೆ ಮುಂದುವರೆಯುತ್ತಾ ಅಥವ ಅರ್ಧಕ್ಕೆ ನಿಲ್ಲುತ್ತಾ ನೋಡಬೇಕು. ಹೈಕೋರ್ಟ್ ಸೂಚನೆಯನ್ನೇ ಎಚ್ಚರಿಕೆ ಎಂದು ತಿಳಿದು ಕಾಂಗ್ರೆಸ್ ಹಿಂದಕ್ಕೆ ಹೆಜ್ಜೆ ಇಟ್ಟು ಗೌರವ ಉಳಿಸಿಕೊಳ್ಳುತ್ತೋ ಅಥವ ಪಾದಯಾತ್ರೆ ಮುಂದಾಳತ್ವ ವಹಿಸಿಕೊಂಡವರೆಲ್ಲ ಜೈಲಿಗೆ ಹೋಗಲು ಸಿದ್ಧರಾಗುತ್ತಾರೋ ನೋಡಬೇಕು.