ಪ್ರಜಾಸ್ತ್ರ ಸುದ್ದಿ
ಕನಕಪುರ: ಮೇಕೆದಾಟು ಯೋಜನೆಯನ್ನು ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಮೇಕೆದಾಟು ಸಂಗಮದಿಂದ ಬೆಂಗಳೂರುವರೆಗೂ ಪಾದಯಾತ್ರೆ ಹಮ್ಮಿಕೊಂಡಿದೆ. ಇದರಲ್ಲಿ ಕೈ ನಾಯಕರು, ವಿವಿಧ ಮಠಗಳು ಮಠಾಧೀಶರು ಭಾಗಿಯಾಗಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸಲು ಸಿನಿಮಾದ ಗಣ್ಯರಿಗೂ ಆಹ್ವಾನ ನೀಡಲಾಗಿತ್ತು. ಹೀಗಾಗಿ ಯಾರೆಲ್ಲ ಭಾಗವಹಿಸುತ್ತಾರೆ ಅನ್ನೋ ಕುತೂಹಲ ಮೂಡಿತ್ತು.
ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ನಟ ದುನಿಯಾ ವಿಜಿ ಭಾಗವಹಿಸಿದ್ದಾರೆ. ಆದರೆ, ಇದರಿಂದ ಶಿವಣ್ಣ ಹಿಂದೆ ಸರಿದಿದ್ದಾರೆ. ಶಿವಣ್ಣನ ಸ್ನೇಹಿತರು, ಆಪ್ತರು ನೀಡಿದ ಸಲಹೆ ಮೇರೆಗೆ ಇದರಲ್ಲಿ ಭಾಗವಹಿಸಿಲ್ಲವೆಂದು ಹೇಳಲಾಗುತ್ತಿದೆ. ಇನ್ನು ಯಾವೆಲ್ಲ ನಟ, ನಟಿಯರು ಭಾಗವಹಿಸುತ್ತಾರೆ ಅನ್ನೋದು ಕಾದು ನೋಡಬೇಕಿದೆ.