ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೇಂದ್ರ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಮಾಡ್ತಿರುವ ಪ್ರತಿಭಟನೆ ವಿರುದ್ಧ ಸರ್ಕಾರ ನಡೆದುಕೊಳ್ತಿರುವ ಧೋರಣೆ ಖಂಡಿಸಿ, ಶನಿವಾರ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗ್ತಿದೆ. ರಾಜ್ಯ ರೈತ ಸಂಘಟನೆಗಳಿಂದ ಹೆದ್ದಾರಿ ಬಂದ್ ಚಳವಳಿ ನಡೆಯಲಿದೆ.
ಕೇಂದ್ರದ ನಡೆಯನ್ನ ವಿರೋಧಿಸಿ ಮತ್ತು ರಾಜ್ಯದ ರೈತರನ್ನ ಬೆಂಬಲಿಸಿ ಈ ಬಂದ್ ಮಾಡಲಾಗ್ತಿದೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯ ತನಕ ರಾಜ್ಯದಲ್ಲಿನ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬಂದ್ ಮಾಡಲಾಗ್ತಿದೆ. ಈ ವೇಳೆ ನಮ್ಗೆ ಸಾರ್ವಜನಿಕರು ಬೆಂಬಲ ನೀಡಿ ಸರ್ಕಾರದ ನಡೆಯನ್ನ ಖಂಡಿಸಬೇಕು ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.