ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಪತ್ನಿ ಗೀತಾ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯೆಯಾಗಿ ನೋಡುವ ಆಸೆ ಇದೆ ಎಂದು ನಟ ಶಿವರಾಜಕುಮಾರ್ ಹೇಳಿದ್ದಾರೆ. ನಗರದ ಕಲಹಳ್ಳಿಯಲ್ಲಿ ಸಚಿವ ಮಧು ಬಂಗಾರಪ್ಪನವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ರಾಜಕೀಯಕ್ಕೆ ಬರಲ್ಲ. ರಾಜಕಾರಣ ಗೊತ್ತಿಲ್ಲ. ಗೀತಾ ಅದೇ ಕುಟುಂಬದಿಂದ ಬಂದವರು. ರಾಜಕೀಯ ಅವರಿಗೆ ರಕ್ತದಲ್ಲಿ ಬಂದಿದೆ. ಕಾಂಗ್ರೆಸ್ ಟಿಕೆಟ್ ಕೊಟ್ಟರೆ, ಸಂಸದೆಯಾಗಿ ಆಯ್ಕೆಯಾದರೆ ಸಂತೋಷವಾಗುತ್ತೆ ಅಂತಾ ಹೇಳಿದರು.