Search

ಎಂಪಿ ಅಭ್ಯರ್ಥಿ ನಾನಲ್ಲ ಎನ್ನುತ್ತಿರುವ ಕಾಂಗ್ರೆಸ್ ಸಚಿವರು: ಸಿ.ಟಿ ರವಿ

138

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಈ ಮೊದಲು ಎಂಪಿ ಚುನಾವಣೆಗೆ ನಾನೂ ಸ್ಪರ್ಧಿಸುತ್ತೇನೆ. ನಾನೂ ಅಭ್ಯರ್ಥಿ ಎನ್ನುತ್ತಿದ್ದ ಕಾಂಗ್ರೆಸ್ ಸಚಿವರು ಈಗ ನನಗೆ ಬೇಡ ಎನ್ನುತ್ತಿದ್ದಾರೆ. ಯಾಕಂದರೆ ಮೋದಿ ಹವಾ ಕಾಂಗ್ರೆಸ್ ಗೂ ಅನುಭವಕ್ಕೆ ಬರುತ್ತಿದೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ ರವಿ ಕಾಲೆಳೆದಿದ್ದಾರೆ.

ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುತ್ತೇವೆ. ದೇಶದಲ್ಲಿ 400 ಹೆಚ್ಚು ಸ್ಥಾನ ಗೆಲ್ಲುವು ಸಂಕಲ್ಪವಿದೆ. ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಎನ್ನುವುದು ಎನ್ ಡಿಎ ಸಮಿತಿ ತೀರ್ಮಾನಿಸುತ್ತದೆ. ಪ್ರತಿ ಬೂತ್ ನಿಂದ ಶೇಕಡ 51ಕ್ಕಿಂತ ಹೆಚ್ಚು ಮತ ಗಳಿಸುವ ತಂತ್ರಗಾರಿಕೆ ರೂಪಿಸಲಿದ್ದೇವೆ ಎಂದಿದ್ದಾರೆ.

100 ದಿನಗಳ ರೋಡ್ ಮ್ಯಾಪಿಗೆ ಸಂಬಂಧಿಸಿದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತೆ. ಇದಕ್ಕಾಗಿ ಪಕ್ಷದೊಳಗೆ, ಸಾರ್ವಜನಿಕವಾಗಿ ನಿರಂತರ ವಿವಿಧ ಚಟುವಟಿಕೆಗಳನ್ನು ನಡೆಸುತ್ತೇವೆ ಅಂತಾ ತಿಳಿಸಿದರು.




Leave a Reply

Your email address will not be published. Required fields are marked *

error: Content is protected !!