ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಯೋಗರಾಜ್ ಭಟ್ ನಿರ್ದೇಶನ, ಶಿವರಾಜಕುಮಾರ್, ಪ್ರಭುದೇವ್, ನಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಟನೆಯ ಕರಟಕ ದಮನಕ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಸಿನಿಮಾ ಆರಂಭದಲ್ಲಿ ನಟ ದಿ.ಪುನೀತ್ ರಾಜಕುಮಾರ್ ಫೋಟೋ ತೋರಿಸಿಲ್ಲವೆಂದು ಅಸಮಾಧಾನ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ನಟ ಶಿವರಾಜಕುಮಾರ್, ಎಲ್ಲ ಸಿನಿಮಾದಲ್ಲೂ ಅಪ್ಪು ಫೋಟೋ ಹಾಕಬೇಕು ಅನ್ನೋದು ಅವಶ್ಯಕ ಮಾಡಬೇಡಿ. ಹಾಗಿದ್ದ ಮೇಲೆ ಎಲ್ಲ ಸಿನಿಮಾ ಚೆನ್ನಾಗಿ ಹೋಗಬೇಕಲ್ವಾ? ಅವರು ಪ್ರೀತಿಯಿಂದ ಅಪ್ಪು ಫೋಟೋ ಹಾಕ್ತರಲ್ವಾ, ನೋಡಿ ಆ ಸಿನಿಮಾ ನೋಡಿ ಗೆಲ್ಲಿಸಿ. ಎಲ್ಲರಪ್ಪ ಹೋಗಿದ್ರಿ ಗೆಲ್ಲಿಸಿ ಎಂದಿದ್ದಾರೆ. ಈ ವಿಚಾರವಾಗಿ ಅಪ್ಪು ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ಸ್ ಮಾಡುವಾಗ ಭಾಷೆ ಬಗ್ಗೆ ವಿಚಾರ ಮಾಡಿ. ನಿಮ್ಮ ಮನೆಯಲ್ಲಿ ಅಮ್ಮ, ಅಕ್ಕ, ತಂಗಿ, ಹೆಂಡ್ತಿ ಇದ್ದಾರೆ. ಅವರು ಇದನ್ನು ನೋಡಿದರೆ ನಿಮ್ಮ ಬಗ್ಗೆ ಏನು ತಿಳ್ಕೋದಿಲ್ಲ. ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಚೆನ್ನಾಗಿಲ್ಲಂತ ಹೇಳಿ ಅಂತಾ ತಮ್ಮ ನೋವು ತೋಡಿಕೊಂಡಿದ್ದಾರೆ.