ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮೇಕೆದಾಟು ನೀರಿಗಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾನುವಾರ ಬೆಳಗ್ಗೆ ಚಾಲನೆ ನೀಡಿದರು. ಕನಕಪುರ ಸಂಗಮದಿಂದ ಪಾದಯಾತ್ರೆಗೆ ಚಾಲನೆ ನೀಡಿದರು.
ಈ ವೇಳೆ ಕಲಾತಂಡಗಳಿಂದ ಭರ್ಜರಿ ಕುಣಿತು, ಮಹಿಳೆಯರಿಂದ ಬಿಂದಿಗೆಯಿಂದ ಹಂಡೆಗೆ ಕಾವೇರಿ ನೀರು ತುಂಬಿಸುವ ಕೆಲಸ. ಡಿಕೆಶಿ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಕೈ ಮುಖಂಡರು, ಮಹಿಳಾ ನಾಯಕಿಯರು ಭಾಗವಹಿಸಿದ್ದಾರೆ.
ಸುಮಾರು 33 ಕಿಲೋ ಮೀಟರ್ ಪಾದಯಾತ್ರೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಇದು ನಾಳೆಯವರೆಗೂ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ರಸ್ತೆಯ ಉದ್ದಕ್ಕೂ ನೀರಿಗಾಗಿ ಹೋರಾಟದ ಬಾವುಟಗಳನ್ನು ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಂಡಿದೆ.