ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮೇಕೆದಾಟು ಯೋಜನೆ ಆರಂಭಕ್ಕೆ ಸಂಬಂಧ ಕಳೆದ ಜನವರಿ 9ರಿಂದ ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿತ್ತು. ನಾಲ್ಕು ದಿನಗಳು ಕಳೆಯುವಷ್ಟರಲ್ಲಿ ಕೋರ್ಟ್ ನಲ್ಲಿ ಪಿಐಎಲ್ ಅರ್ಜಿಯಿಂದ ಅರ್ಧಕ್ಕೆ ಮೊಟಕುಗೊಂಡಿತ್ತು. ಇದೀಗ ನಾಳೆಯಿಂದ ಮತ್ತೆ ಶುರುವಾಗಲಿದೆ.
ರಾಮನಗರದಲ್ಲಿ ನಿಂತಿದ್ದ ಪಾದಯಾತ್ರೆ ನಾಳೆ ಬೆಳಗ್ಗೆ ಅಲ್ಲಿಂದಲೇ ಶುರುವಾಗಲಿದೆ. ಬಿಡದಿ, ಕೆಂಗೇರಿ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ವೇಳೆ ಚಿತ್ರರಂಗದ ಯಾರೆಲ್ಲ ಭಾಗವಹಿಸುತ್ತಾರೆ, ಯಾವೆಲ್ಲ ಸಂಘಟನೆಗಳು ಸಾಥ್ ನೀಡುತ್ತವೆ ಅನ್ನೋದು ನಾಳೆ ತಿಳಿಯಲಿದೆ.