ಸ್ನೇಹಿತರೆ ತಂದ ಮೃತ್ಯು..! ಬಾವಿಯಲ್ಲಿ ಮುಳಗಿ ಯುವಕ ಸಾವು..

288

ಪ್ರಜಾಸ್ತ್ರ ಸುದ್ದಿ

ರಾಮನಗರ: ಈಜು ಬಾರದ ಸ್ನೇಹಿತನನ್ನ ಬಾವಿಗೆ ತಳ್ಳಿ ಮಜಾ ತೆಗೆದುಕೊಳ್ಳಲು ಹೋಗಿದ್ದವರಿಗೆ ಶಾಕ್ ಆಗಿದೆ. ಸ್ನೇಹಿತರು ಮಾಡಿದ ಹುಚ್ಚಾಟಕ್ಕೆ ಹೆಬ್ಬೂರು ಮೂಲದ 27 ವರ್ಷದ ಲಕ್ಷ್ಮೀಕಾಂತ ಮೃತಪಟ್ಟಿದ್ದಾನೆ. ಇಂತಹ ದುರಂತ ಮಾಗಡಿ ತಾಲೂಕಿನ ತಗಚ್ಚುಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಖಾಸಗಿ ಕಂಪನಿಯೊಂದರಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡ್ತಿರುವಂತಹ ಗೆಳೆಯರ ತಂಡ ರಜೆ ಪಡೆದು ಪಾರ್ಟಿ ಮಾಡಿದೆ. ಇದೆ ಖುಷಿಯಲ್ಲಿದ್ದಾಗ ಬಲರಾಮ ಎಂಬುವವರಿಗೆ ಸೇರಿದ ಕಲ್ಲು ಬಾವಿಗೆ ಈಜಲು ಹೋಗಿದ್ದಾರೆ. ಈ ವೇಳೆ ಈಜು ಬಾರದ ಲಕ್ಷ್ಮೀಕಾಂತ ದಂಡೆಯ ಮೇಲೆ ಕುಳಿತಿದ್ದಾನೆ.

ಹೀಗೆ ಸುಮ್ಮನಿದ್ದ ಸ್ನೇಹಿತನನ್ನ ಅವನ ಪಾಡಿಗೆ ಬಿಟ್ಟಿದ್ದರೆ ಈ ದುರಂತ ಸಂಭವಿಸ್ತಿರ್ಲಿಲ್ಲ. ದಂಡೆಯ ಮೇಲೆ ಕುಳ್ತಿದ್ದವನನ್ನ ಬಾವಿಗೆ ತಳ್ಳಿದ್ದಾರೆ. ಆಗ ಸಹಾಯಕ್ಕೆ ಲಕ್ಷ್ಮೀಕಾಂತ ಕೇಳಿಕೊಳ್ತಿದ್ರೂ ಮೊಬೈಲ್ ನಲ್ಲಿ ಶೂಟ್ ಮಾಡುತ್ತಾ ನಿಂತಿದ್ದಾರೆ. ಬಳಿಕ 5 ಮಂದಿ ಸ್ನೇಹಿರು ಬಾವಿಗೆ ಹಾರಿ ಮೇಲೆತ್ತಲು ನೋಡಿದ್ದಾರೆ. ಆದ್ರೆ, ಲಕ್ಷ್ಮೀಕಾಂತ ಪಾಚಿಗೆ ಸಿಲುಕಿಕೊಂಡು ಮೃತಪಟ್ಟಿದ್ದಾನೆ. ಈ ಸಂಬಂಧ 5 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಏನೋ ಮಾಡಲು ಹೋಗಿ ಅನ್ಯಾಯವಾಗಿ ಒಬ್ಬನ ಪ್ರಾಣ ಹೋಗಿದೆ.




Leave a Reply

Your email address will not be published. Required fields are marked *

error: Content is protected !!