ಭರ್ಜರಿ ಸ್ಕೆಚ್ ಹಾಕಿ ಕಳ್ಳತನ ಮಾಡ್ತಿದ್ದ ಕಿಲಾಡಿ ಅಂದರ್

359

ಪ್ರಜಾಸ್ತ್ರ ಸುದ್ದಿ

ರಾಮನಗರ: ಖತರ್ನಾಕ್ ಕಳ್ಳನನ್ನ ಮಾಗಡಿ ಪೊಲೀಸ್ರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಒಡೆದು ಕಳ್ಳತನ ಮಾಡ್ತಿದ್ದ ಕಳ್ಳನನ್ನ ಬಂಧಿಸಿದ್ದಾರೆ. ಉದಯಕುಮಾರ ಅಲಿಯಾಸ್ ಅಶೋಕ ಬಂಧಿತ ಆರೋಪಿಯಾಗಿದ್ದಾನೆ.

ರಾಜ್ಯದ ಹಲವು ಭಾಗಗಳಲ್ಲಿ ಕಳ್ಳತನ ನಡೆಸಿದ್ದ ಈತ, 18 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಬಂಧಿತನಿಂದ 560 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ವಸ್ತುಗಳು, ಒಂದು ಕಾರು ಹಾಗೂ 2 ಬೈಕ್ ವಶಪಡಿಸಿಕೊಳ್ಳಲಾಗಿದೆ. ಭರ್ಜರಿ ಸ್ಕೆಚ್ ಹಾಕಿ ಕಳ್ಳತನ ಮಾಡ್ತಿದ್ದ. ಅದರಿಂದ ಸಿಗುವ ಹಣದಲ್ಲಿ ಬಿಂದಾಸ್ ಜೀವನ ಮಾಡ್ತಿದ್ದ. ಇಂಥಾ ಕಿಲಾಡಿ ಕಳ್ಳ ಕಂಬಿ ಹಿಂದೆ ಸೇರಿದ್ದಾನೆ.




Leave a Reply

Your email address will not be published. Required fields are marked *

error: Content is protected !!