ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು: ಕಳೆದ ಜುಲೈ 12ರಂದು ಉಂಡೇ ದಾಸರಹಳ್ಳಿ ರಾಜಕಾಲುವೆಯಲ್ಲಿ ಸುರೇಶ್ ಅನ್ನೋ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದ. ಆತನ ಪತ್ತೆಗಾಗಿ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು 7 ದಿನಗಳ ಕಾಲ ಶೋಧ ನಡೆಸಿ, ಕಾರ್ಯಾಚರಣೆ ನಿಲ್ಲಿಸಿದ್ದರು. ಇದೀಗ ನೋಡಿದರೆ ಕೊಚ್ಚಿ ಹೋದ ವ್ಯಕ್ತಿ ಪ್ರತ್ಯಕ್ಷನಾಗಿದ್ದಾನೆ.
14 ದಿನಗಳ ಬಳಿಕ ಸುರೇಶ್ ಎಂಬಾತ ಪ್ರತ್ಯಕ್ಷನಾಗಿದ್ದು, ಎಲ್ಲರಿಗೂ ಅಚ್ಚರಿಯಾಗಿದ್ದರೆ, ಕುಟುಂಬಸ್ಥರಿಗೆ ಖುಷಿಯಾಗಿದೆ. ಭಾರಿ ಮಳೆಯಿಂದಾಗಿ ರಾಜುಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ಎಸ್ ಡಿಆರ್ ಎಫ್ ಸಿಬ್ಬಂದಿ ಸಹ ಹುಡುಕಾಟ ನಡೆಸಿದ್ದರು ಸಹ ಪತ್ತೆಯಾಗಿರಲಿಲ್ಲ.