ಅಥಣಿ: ನಾಳೆಯಿಂದ ರಾಜ್ಯದಲ್ಲಿ ಎಂಎಸ್ಐಎಲ್ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಹೀಗಾಗಿ ನಗರದಲ್ಲಿ ನಾಳೆಯಿಂದ ಬಾರ್ ಓಪನ್ ಮಾಡಲು ಸಿದ್ಧತೆ ನಡೆಸಿದ್ದಾರೆ.
ಕಳೆದ ಒಂದುವರೆ ತಿಂಗಳಿಂದ ಮದ್ಯದ ಅಂಗಡಿಗಳು ಬಂದ್ ಇದ್ವು. ನಾಳೆ ಓಪನ್ ಆಗ್ತಿದ್ದು, ಎಣ್ಣೆ ಪ್ರಿಯರು ಫುಲ್ ಖುಷಿಯಾಗಿದ್ದಾರೆ. ಹೀಗಾಗಿ ಮದ್ಯ ಮಾರಾಟ ಮಳಗೆಗಳು ಎಲ್ಲ ರೀತಿಯಿಂದ ಸಿದ್ಧತೆ ನಡೆಸಿವೆ. ಸಿಎಲ್ 2 ಮತ್ತು ಎಮ್ಎಸ್ಐಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ ಮಾತ್ರ ಮದ್ಯ ದೊರೆಯಲಿದೆ.
ಸರಕಾರದ ನಿಯಮ ಪ್ರಕಾರ ಅಂತರಕಾಯ್ದುಕೊಳ್ಳಲು ಮತ್ತು ಸರದಿ ಸಾಲಿನಲ್ಲಿ ನಿಲ್ಲಲು ಸುಣ್ಣದ ಮಾರ್ಕ್ ಹಾಗೂ ಬಿದಿರಿನ ಕೋಲುಗಳನ್ನ ಕಟ್ಟಲಾಗಿದೆ. ಮದ್ಯ ಖರೀದಿಸುವವರು ಮುಖಕಕ್ಕೆ ಮಾಸ್ಕ್ ಹಾಕಿಕೊಂಡು ಬಂದರೆ ಮಾತ್ರ ಮದ್ಯ ನಿಡಲಾಗುವದು ಎಂದು ನಾಮ ಫಲಕವನ್ನು ಅಂಗಡಿ ಮುಂದೆ ಹಾಕಲಾಗಿದೆ. ಈ ವೇಳೆ ಎಮ್ಎಸ್ಐಎಲ್ ಅಂಗಡಿಯ ಮ್ಯಾನೇಜರ ಬಸವರಾಜ ತೇಲಿ, ಸಿಬ್ಬಂದಿ ಶಿವಾನಂದ ಅಂಬಿ, ಚೇತನ ಗೊಂದಳಿ, ಮಹಾಂತೇಶ ಠಕ್ಕಣ್ಣವರ ಪಾಲ್ಗೊಂಡಿದ್ದರು.