ಪ್ರಜಾಸ್ತ್ರ ಅಪರಾಧಿ ಸುದ್ದಿ
ಕುಂದಾಪುರ: ಉದಯ ಗಾಣಿಗ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಮೊಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಾಣೇಶ ಯಡಿಯಾಳ್ ಎಂಬಾತನನ್ನ ಬಂಧಿಸಲಾಗಿದೆ.
ಯಡಮೊಗೆಯ ಹೊಸಬಾಳು ನಿವಾಸಿ ಉದಯ ಗಾಣಿಗ(45) ಎಂಬುವರ ಕೊಲೆ ಶನಿವಾರ ರಾತ್ರಿ ನಡೆದಿದೆ. ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನ ತಡರಾತ್ರಿ 3ಗಂಟೆಯ ಸುಮಾರಿಗೆ ಉಳ್ಳೂರು-74 ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರ ಮನೆಯಲ್ಲಿ ಬಂಧಿಸಲಾಗಿದೆ.
ರಾತ್ರಿ ಸುಮಾರು 8ಗಂಟೆಯ ಸಮಯದಲ್ಲಿ ಮನೆಯ ಮುಂದಿನ ರಸ್ತೆಯಲ್ಲಿ ನಿಂತಿದ್ದ ಉದಯ ಎಂಬುವರ ಮೇಲೆ ಪ್ರಾಣೇಶ ಕಾರು ಹಾಯಿಸಿಕೊಂಡು ಹೋಗಿದ್ದಾನೆ. ಇದು ಅಪಘಾತವಲ್ಲ, ಕೊಲೆ ಎಂದು ಕುಟುಂಬಸ್ಥರು ಶಂಕಿಸಿದ್ದು, ಇದೀಗ ಕೊಲೆ ಆರೋಪದಲ್ಲಿ ಪ್ರಾಣೇಶನನ್ನ ಅರೆಸ್ಟ್ ಮಾಡಲಾಗಿದೆ.