ಇದೇನ್ ತಮ್ಮಣ್ಣ ನಿಮ್ಮ ವರ್ಸೆ…

356

ಮಂಡ್ಯ: ಸಚಿವ ಡಿಸಿ ತಮ್ಮಣ್ಣ ಇದೀಗ ಮತ್ತೆ ದ್ವೇಷದ ರಾಜಕಾರಣ ಮಾಡ್ತಿರುವುದು ಬೆಳಕಿಗೆ ಬಂದಿದೆ. ಬೇಸಳ್ಳಿ ಹಾಗೂ ಮದ್ದೂರಮ್ಮ ಗ್ರಾಮಸ್ಥರ ವಿರುದ್ಧ ಡಿಸಿ ತಮ್ಮಣ್ಣ ನಿಮಗೆ ನಾಚಿಕೆ ಆಗಲ್ವಾ ಅಂತಾ ಮಾತ್ನಾಡಿರೋದು ಇದೀಗ ವಿವಾದದ ಕಿಡಿ ಹೊತ್ತಿಸಿದೆ.

ಬೇಸಳ್ಳಿ ಗ್ರಾಮಸ್ಥರು, ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಇದ್ರಿಂದ ಗರಂ ಆದ ಸಚಿವ ಡಿ.ಸಿ ತಮ್ಮಣ್ಣ, ವೋಟ್ ಹಾಕಲು ಅವರು ಬೇಕು, ಅಭಿವೃದ್ಧಿ ಮಾಡಲು ನಾವು ಬೇಕಾ ಅಂತಾ ಹೇಳುವ ಮೂಲಕ ಲೋಕಸಭಾ ಚುನಾವಣೆಯ ಸೋಲಿನಿಂದ ಸೇಡಿನ ರಾಜಕಾರಣ ಮಾಡ್ತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿನ ಸೋಲನ್ನ ಜೆಡಿಎಸ್ ನಾಯಕರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ಹೀಗಾಗಿ ಹೋದಲ್ಲಿ ಬಂದಿಲ್ಲಿ ಮತದಾರರ ವಿರುದ್ಧ ತುಂಬಾ ಕೆಟ್ಟದಾಗಿ ಮಾತ್ನಾಡ್ತಿದ್ದಾರೆ. ಸಚಿವ ಡಿ.ಸಿ ತಮ್ಮಣ್ಣ ಬಾಯಿಗೆ ಬಂದಂತೆ ಮಾತ್ನಾಡ್ತಿರೋದು ನಿಜಕ್ಕೂ ದುರಂತ.




Leave a Reply

Your email address will not be published. Required fields are marked *

error: Content is protected !!