ಎಲ್ಲೆಡೆ ರಕ್ಷಾ ಬಂಧನದ ಸಂಭ್ರಮ

169

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದು ನಾಡಿನ ತುಂಬಾ ರಕ್ಷಾ ಬಂಧನವನ್ನು ಸಂಭಮ್ರದಿಂದ ಆಚರಿಸಲಾಗುತ್ತಿದೆ. ಸಹೋದರ, ಸಹೋದರಿಯರ ಸಂಕೇತವಾದ ನೂಲು ಹುಣ್ಣಿಮೆ ಸಾಕಷ್ಟು ವಿಶೇಷತೆಯಿಂದ ಕೂಡಿದೆ.

ನೂಲು ಹುಣ್ಣಿಮೆ ಪ್ರಯುಕ್ತ ಸಹೋದರನಿಗೆ ಸಹೋದರಿಗೆ ಶ್ರೀರಕ್ಷೆಯ ಸಂಕೇತವಾಗಿ ನೂಲು(ದಾರ) ಕಟ್ಟುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಂದು ಅದು ರಾಖಿಯ ಸ್ವರೂಪ ಪಡೆದು ವಿವಿಧ ರೀತಿಯ ರಾಖಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಎಲ್ಲ ಧರ್ಮೀಯರು ಈ ಹಬ್ಬವನ್ನು ಆಚರಿಸುತ್ತಾರೆ. ಹೀಗಾಗಿ ಬೆಳಗ್ಗೆ ಗಂಡ್ಮಕ್ಕಳು ಎಣ್ಣೆಸ್ಥಾನ ಮಾಡಿ, ಸಹೋದರಿಯರಿಂದ ಆರತಿ ಬೆಳಗಿಸಿಕೊಂಡು ರಾಖಿ ಕಟ್ಟಿಸಿಕೊಂಡ ನಂತರ ಬಾಯಿ ಸಿಹಿ ಮಾಡಿಕೊಳ್ಳಲಾಗುತ್ತೆ. ನಂತರ ಒಬ್ಬರಿಗೊಬ್ಬರು ಹಾರೈಕೆ ವಿನಿಮಯ ಮಾಡಿಕೊಳ್ಳುವುದೇ ರಕ್ಷಾ ಬಂಧನವಾಗಿದೆ.




Leave a Reply

Your email address will not be published. Required fields are marked *

error: Content is protected !!