ವಿಜಯಪುರ: ನಂದಿಗೆ ಚಪ್ಪಲಿ ಹಾರ ಹಾಕಿ ಬಸವಣ್ಣನಿಗೆ ಅವಮಾನ ಮಾಡಿದ ಘಟನೆ ಗೊಳಸಂಗಿ ಗ್ರಾಮದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ಬಸವಣ್ಣನ ದೇಗುಲದಲ್ಲಿರುವ ನಂದಿಗೆ ಕಿಡಿಗೇಡಿಗಳು ಚಪ್ಪಲಿಯ ಹಾರಿ ಹಾಕಿದದ್ದಾರೆ. ಬೆಳಗ್ಗೆ ಪೂಜೆ ಮಾಡಲು ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.
ದೇವಸ್ಥಾನದಲ್ಲಿ ಯಾರೂ ಇಲ್ಲದನ್ನ ನೋಡಿದ ಕಿಡಿಗೇಡಿಗಳು ನಿನ್ನ ಮಧ್ಯರಾತ್ರಿ ಈ ಕೃತ್ಯ ಎಸಗಿದ್ದಾರೆ. ಇದ್ರಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತವಾರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಕೂಡಗಿ ಎನ್ ಟಿಪಿಸಿ ಠಾಣೆಯ ಪಿಎಸ್ಐ ಬಸವರಾಜ ಅವಟಿ ಆಗಮಿಸಿದ್ದು, ಪೊಲೀಸ್ರನ್ನ ನಿಯೋಜನೆ ಮಾಡಲಾಗಿದೆ.