ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹೆಚ್ಡಿಕೆ ಕುಟುಂಬದವರು ತಮ್ಮನ್ನು ಬಿಟ್ಟು ಯಾರನ್ನೂ ಬೆಳೆಯಲು ಬಿಡುವುದಿಲ್ಲ. ನಾವೆಲ್ಲ ಯಾಕೆ ಪಕ್ಷ ಬಿಟ್ಟಿದ್ದು ಎಂದು ಎಂದು ಸಚಿವ ನಾರಾಯಣಗೌಡ ವಾಗ್ದಾಳಿ ನಡೆಸಿದರು. ಕೆ.ಆರ್ ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದರು.
ನಾನು, ಎಚ್.ವಿಶ್ವನಾಥ್, ಎ.ಟಿ ರಾಮಸ್ವಾಮಿ, ಶಿವಲಿಂಗೇಗೌಡ, ವೈ.ಎಸ್.ವಿ ದತ್ತಾ ಎಲ್ಲ ಜೆಡಿಎಸ್ ಪಕ್ಷ ಬಿಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು, ಪಕ್ಷದಲ್ಲಿ ಬೆಳೆಯುವ ನಾಯಕರಿಗೆ ಟಾರ್ಗೆಟ್ ಮಾಡುತ್ತಾರೆ. ಹೀಗೆ ಮಾಡಿದರೆ ನಾವು ಎಷ್ಟು ದಿನ ಕಾಯಕ್ಕಾಗುತ್ತೆ ಎಂದು ಹೇಳುವ ಮೂಲಕ ಜೆಡಿಎಸ್ ತೊರೆಯುತ್ತಿರುವವರ ಬಗ್ಗೆ ಸಮರ್ಥಿಸಿಕೊಂಡರು.