ರಾಜಕೀಯ-ದೋಸ್ತಿ ಬೇರೆ ಬೇರೆ

360

ಬೆಂಗಳೂರು: ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಲು ಹಾಗೂ ಬೇಗ ಗುಣಮುಖರಾಗಿಯೆಂದು ಹಾರೈಸಲು ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡ್ತಿದ್ದಾರೆ.

ಪಕ್ಷಾತೀತವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಆದಿಯಾಗಿ ಬಿಜೆಪಿಯ ಹಲವು ನಾಯಕರು, ಕಾಂಗ್ರೆಸ್ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸ್ತಿದ್ದಾರೆ. ಇಂದು ಸಚಿವ ವಿ.ಸೋಮಣ್ಣ, ಶಾಸಕರಾದ ಬಿ.ಸಿ ಪಾಟೀಲ, ಮಹೇಶ ಕುಮಟಳ್ಳಿ ಸೇರಿದಂತೆ ಅನೇಕ ನಾಯಕರು ಮಲ್ಲೇಶ್ವರಂದಲ್ಲಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ರು. ಈ ವೇಳೆ ಮಾತ್ನಾಡಿದ ವಿ.ಸೋಮಣ್ಣ, ರಾಜಕೀಯ ಬೇರೆ. ದೋಸ್ತಿಯೇ ಬೇರೆ ಅಂತಾ ಹೇಳಿದ್ರು. ಅವರು ನಾನು ಬಹಳ ಕಾಲದ ಸ್ನೇಹಿತರು. ಅವರು ಬೇಗ ಗುಣಮುಖರಾಗ್ಲಿ ಅಂತಾ ಹಾರೈಯಿಸಿದ್ರು.




Leave a Reply

Your email address will not be published. Required fields are marked *

error: Content is protected !!