ಪ್ರಜಾಸ್ತ್ರ ಸುದ್ದಿ
ಮೈಸೂರು: ಜಿಲ್ಲೆಯಲ್ಲಿ ಇನ್ಮುಂದೆ ಅಪ್ರಾಪ್ತರು ಬೈಕ್, ಕಾರು ತೆಗೆದುಕೊಂಡು ಬಂಕ್ ಗೆ ಬಂದ್ರೆ ಪೆಟ್ರೋಲ್, ಡೀಸೆಲ್ ಸಿಗೋದಿಲ್ಲ. ಅಪ್ರಾಪ್ತರು ಬೈಕ್ ತೆಗೆದುಕೊಂಡು ಬಂಕ್ ಗೆ ಬಂದ್ರೆ ಪೆಟ್ರೋಲ್, ಡೀಸೆಲ್ ಹಾಕದಂತೆ ಪೊಲೀಸರು ಸೂಚಿಸಿದ್ದಾರೆ.
ಅಪ್ರಾಪ್ತ ಬೈಕ್ ಸವಾರರಿಂದ ಆಗ್ತಿರುವ ಅಪಘಾತ ತಡೆಯುವ ನಿಟ್ಟಿನಲ್ಲಿ ಮೈಸೂರು ಡಿಸಿಪಿ ಗೀತಾ ಪ್ರಸನ್ನ ಅವರು ಬಂಕ್ ಮಾಲೀಕರಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ್ರೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವ ಅವರ ಗಾಡಿ ಸಂಖ್ಯೆ, ಫೋಟೋ ನೀಡಿ ಎಂದಿದ್ದಾರೆ.