ಪ್ರಜಾಸ್ತ್ರ ಸುದ್ದಿ
ಕೇರಳ: ಸುಮಾರು 9 ವರ್ಷದ ಬಾಲಕನೊಬ್ಬ ಕ್ಷಣಾರ್ಧದಲ್ಲಿ ಎರಡು ಕಡೆ ಸಾವಿನ ದವಡೆಯಿಂದ ಪಾರಾದ ಭಯಾನಕ ಘಟನೆಯೊಂದು ಕಣ್ಣೂರಿನ ತಳಿಪರಂಬ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.
ಬಾಲಕನೊಬ್ಬ ಸೈಕಲ್ ಮೂಲಕ ರಸ್ತೆ ದಾಟಲು ಹೋದಾಗ ವೇಗವಾಗಿ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಹಾರಿ ಬಿದ್ದಿದ್ದಾನೆ. ಬೈಕ್ ಹಿಂದೆಯೇ ಇದ್ದ ಬಸ್ ಸೈಕಲ್ ಮೇಲೆ ಹರಿದು ಹೋಗಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ನಿಜಕ್ಕೂ ಬಾಲಕನ ಆಯುಷ್ಯ ಗಟ್ಟಿಯಾಗಿದೆ.