ಪ್ರಜಾಸ್ತ್ರ ಸುದ್ದಿ
ಸಧ್ಯ ನಡೆಯುತ್ತಿರುವ ಕೆಲವೊಂದಿಷ್ಟು ಬೆಳವಣಿಗೆ ಸಂಬಂಧಿಸಿದಂತೆ ನಟಿ, ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದು, ಹೆಣ್ಣು ತಾಯಿ ದುರ್ಗೆಯ ಮೂರ್ತರೂಪವಾಗಿದ್ದಾರೆ. ಸ್ತ್ರೀದ್ವೇಷ, ದುಷ್ಟತನದ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದ್ದಾರೆ.
ವಿಚ್ಛೇಧನ ಕಾರಣಕ್ಕೆ ಸಮಂತಾ, ಅಭಿಪ್ರಾಯ ಹೇಳಿದ್ದಕ್ಕೆ ಸಾಯಿ ಪಲ್ಲವಿ, ಪ್ರತ್ಯೇಕತೆ ಬಗ್ಗೆ ಮಾತನಾಡಿದ ರಶ್ಮಿಕಾ, ಬಟ್ಟೆ ವಿಚಾರವಾಗಿ ದೀಪಿಕಾ ಸೇರಿ ಅನೇಕ ಮಹಿಳೆಯರು ಎಲ್ಲದಕ್ಕೂ ಟ್ರೋಲ್ ಆಗುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು. ಇದಕ್ಕಾಗಿ ಹೋರಾಡಬೇಕಿದೆ ಎಂದಿದ್ದಾರೆ.