ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ, ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಪ್ರಕಾಶ್ ಹುಕ್ಕೇರಿಗೆ ಟಿಕೆಟ್ ಘೋಷಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಹುಕ್ಕೇರಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಬಿಜೆಪಿಯಿಂದ ಅರುಣ್ ಶಾಹಪೂರಗೆ ಟಿಕೆಟ್ ಘೋಷಿಸಲಾಗಿದೆ. ಹಾಲಿ ಪರಿಷತ್ ಸದಸ್ಯರ ವಿರುದ್ಧ ಹುಕ್ಕೇರಿ ಕಣಕ್ಕೆ ಇಳಿದಿದ್ದು, ಚುನಾವಣೆ ಕಣ ರಂಗೇರಲಿದೆ. 35 ವರ್ಷಗಳ ರಾಜಕೀಯ ಅನುಭವ ಹುಕ್ಕೇರಿ ಕೈ ಹಿಡಿಯುತ್ತಾ ನೋಡಬೇಕು.