ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಅರುಣ್ ಶಾಹಪೂರಗೆ ಸೋಲಿನ ಕಹಿ ಅನುಭವ ಆಗಿದೆ.
ಪ್ರಕಾಶ್ ಹುಕ್ಕೇರಿ 10,521 ಮತಗಳನ್ನು ಪಡೆದಿದ್ದಾರೆ. ಅರುಣ್ ಶಾಹಪೂರ್ 6,051 ಮತಗಳನ್ನು ಪಡೆದಿದ್ದಾರೆ. ಒಟ್ಟು 21,401 ಮತಗಳು ಚಲಾವಣೆ ಆಗಿದ್ದವು. 1,204 ಮತಗಳು ತಿರಸ್ಕಾರಗೊಂಡಿವೆ. ನಗರ ಜ್ಯೋತಿ ಪಿಯು ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.