ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ವಾಯುವ್ಯ, ಪಶ್ಚಿಮ, ದಕ್ಷಿಣ ಪದವೀಧರ, ಶಿಕ್ಷಕರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಸೋಮವಾರ ಮತದಾನ ನಡೆದಿದೆ. ಇದೀಗ ಮತ ಎಣಿಕೆ ಕಾರ್ಯ ಶುರುವಾಗಿದೆ. ಸ್ಟ್ರಾಂಗ್ ರೂಮ್ ಓಪನ್ ಆಗಿದ್ದು, ಮತ ಎಣಿಕೆ ಕಾರ್ಯ ನಡೆದಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಸೇರಿ 49 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲೂ ಬಹುಮುಖ್ಯವಾಗಿ ಅರುಣ್ ಶಾಹಪೂರ್, ಪ್ರಕಾಶ್ ಹುಕ್ಕೇರಿ, ಬಸವರಾಜ್ ಹೊರಟ್ಟಿ, ಬಸವರಾಜ್ ಸಂಕ, ಹಣಮಂತ ನಿರಾಣಿ ನಾಯಕರ ನಡುವೆ ನೇರಾನೇರ ಫೈಟ್ ಇದೆ. . ಇವರೆಲ್ಲರ ಮುಂದಿನ ರಾಜಕೀಯ ಭವಿಷ್ಯ ಇನ್ನೇನು ಕೆಲ ಗಂಟೆಗಳಲ್ಲೇ ಹೊರ ಬೀಳಲಿದೆ.