ಪ್ರಜಾಸ್ತ್ರ ಸದ್ದಿ
ಬೆಂಗಳೂರು: ಶಿಕ್ಷಕರ ಹಾಗೂ ಪದವೀಧರ 4 ಕ್ಷೇತ್ರಗಳ ಚುನಾವಣೆ ಸೋಮವಾರ ನಡೆದಿದೆ. ನಾಳೆ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಸೇರಿದಂತೆ 49 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಹಾಗೂ ದಕ್ಷಿಣ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. 49 ಅಭ್ಯರ್ಥಿಗಳಲ್ಲಿ ಎಲ್ಲರ ನಿರೀಕ್ಷೆ ಇರೋದು ಬಿಜೆಪಿಯ ಅರುಣ್ ಶಾಹಪೂರ್, ಹಣಮಂತ ನಿರಾಣಿ, ಬಸರಾಜ್ ಹೊರಟ್ಟಿ, ಕಾಂಗ್ರೆಸ್ ನ ಮಧು ಜಿ. ಮಾದೇಗೌಡ, ಸುನೀಲ ಸಂಕ, ಬಸವರಾಜ್ ಗುರಿಕಾರ, ಜೆಡಿಎಸ್ ನಿಂದ ಶ್ರೀಶೈಲ ಗುಡದಿನ್ನಿ ಅವರ ಫಲಿತಾಂಶದ ಮೇಲೆ ಎಲ್ಲರ ಕಣ್ಣು.
ಕ್ಷೇತ್ರಗಳ ವ್ಯಾಪ್ತಿ ಹೀಗಿದೆ
ವಾಯುವ್ಯ ಶಿಕ್ಷಕರ ಹಾಗೂ ಪದವೀಧದರ ಕ್ಷೇತ್ರದ ವ್ಯಾಪ್ತಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಇದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ವ್ಯಾಪ್ತಿ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಹಾಗೂ ದಕ್ಷಿಣ ಪದವೀಧರ ಕ್ಷೇತ್ರದ ವ್ಯಾಪ್ತಿ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಆಗಿದೆ.