ಪ್ರಜಾಸ್ತ್ರ ಸುದ್ದಿ
ಸಿಂದಗಿ: ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಇಂದು ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಕೇಂದ್ರದ ಸುತ್ತ ಪೊಲೀಸ್ ಬಂದೋಬಸ್ತಿ ಮಾಡಲಾಗಿತ್ತು. ಅಲ್ದೇ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ಅವರು ಭೇಟಿ ಸಹ ನೀಡಿದ್ದರು.
ಇದೆಲ್ಲದರ ನಡುವೆ ಬಿಜೆಪಿ ಏಜೆಂಟ್ ಹಾಗೂ ಸಿಪಿಐ, ಪಿಎಸ್ಐ ಅವರ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ. ಮತಗಟ್ಟೆ ಕೇಂದ್ರದ ಗೇಟ್ ಮುಂದೆ ಧರಣಿ ಕುಳಿತ ಬಿಜೆಪಿ ಏಜೆಂಟ್ ಮಲ್ಲಿಕಾರ್ಜುನ ಪೂಜಾರಿ, ಅನಾವಶ್ಯಕ ಜನರನ್ನು ಒಳಗೆ ಬಿಡಬೇಡಿ ಎಂದು ವಾಗ್ವಾದ ನಡೆಸಿದರು. ಇದರಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.