ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಐಟಿ ದಾಳಿ ವೇಳೆ ಮಾಜಿ ಕಾರ್ಪೂರೇಟರ್ ಅಂಬಿಕಾಪತಿ ಅವರಿಗೆ ಸಂಬಂಧಿಸಿದ ಫ್ಲ್ಯಾಟ್ ನಲ್ಲಿ 40 ಕೋಟಿಗೂ ಹೆಚ್ಚು ಮೊತ್ತ ಸಿಕ್ಕಿದೆ. ಇದು ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಗುತ್ತಿಗೆದಾರರ ಸಂಘ ಕಾಂಗ್ರೆಸ್ ಏಜೆಂಟ್ ತರ ಕೆಲಸ ಮಾಡುತ್ತಿದೆ ಅನ್ನೋದಕ್ಕೆ ಇದು ಸಾಕ್ಷಿ ಎಂದು ಬಿಜೆಪಿ ಮಾಜಿ ಸಚಿವ, ಶಾಸಕ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ. ಅಂಬಿಕಾಪತಿ ನನಗೆ ಚೆನ್ನಾಗಿ ಗೊತ್ತು. ಅವರು 50 ಸಾವಿರದಿಂದ 1 ಲಕ್ಷ ರೂಪಾಯಿ ತನಕ ಗುತ್ತಿಗೆ ಕೆಲಸ ಶುರು ಮಾಡಿ 20-30 ಲಕ್ಷ ರೂಪಾಯಿ ತನಕ ಕೆಲಸ ಮಾಡಕೊಂಡು ಬಂದರು. ಸುಮಾರು 20 ವರ್ಷ ಆಯಿತು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳುವ ಮೂಲಕ, ಇದರ ಹಿಂದೆ ಕಾಂಗ್ರೆಸ್ ಇದೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಐದು ರಾಜ್ಯಗಳ ಚುನಾವಣೆ ಸಂಬಂಧ ಈ ಹಣ ಸಂಗ್ರಹ ಅನ್ನೋದು ಬೇಸ್ ಲೆಸ್. ನಾವು ಯಾವ ರಾಜ್ಯಕ್ಕೂ ಹಣ ಕೊಡುವುದೂ ಇಲ್ಲ. ಅವರು ಕೇಳುವುದೂ ಇಲ್ಲ. ಚುನಾವಣೆಗೆ ಇಲ್ಲಿಂದ ದುಡ್ಡು ಹೋಗಿದೆ ಅನ್ನೋದು ಬಿಜೆಪಿಯವರು ನೋಡಿದಾರಾ ಅಂತಾ ಕಿಡಿ ಕಾರಿದರು.