ಪುತ್ರಿ ಕೊಂದು ತಾನು ಸಾವಿಗೆ ಶರಣಾದ ತಾಯಿ

239

ಪ್ರಜಾಸ್ತ್ರ ಸುದ್ದಿ

ಹಾಸನ: ಏನೂ ಅರಿಯದ ಎರಡೂವರೆ ವರ್ಷದ ಮಗಳನ್ನ ನೇಣು ಬೀಗಿದು ಕೊಂದ ತಾಯಿಯೊಬ್ಬಳು, ತಾನು ಸಾವಿಗೆ ಶರಣಾಗಿದ್ದಾಳೆ. ಈ ದಾರುಣ ಘಟನೆ ಸಕಲೇಶಪುರದ ಆನೇಮಹಲನಲ್ಲಿ ನಡೆದಿದೆ. ಪ್ರಜ್ವಲ(26) ಹಾಗೂ ಮಗಳು ಸಾದ್ವಿ(2.5) ಮೃತ ದುರ್ದೈವಿಗಳು.

ಪ್ರಜಲ್ವ ಮೊದಲ ಪತಿ ಸುರೇಂದ್ರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ನೋವಿನಿಂದ ಪತ್ನಿ ಇನ್ನು ಹೊರ ಬಂದಿರ್ಲಿಲ್ಲ. ಹೀಗಿರುವಾಗ ಸಣ್ಣ ವಯಸ್ಸಿನ ಮಗಳ ಜೀವನ ಹಾಳಾಗಬಾರದು ಎಂದುಕೊಂಡು, ಜೂನ್ 16ರಂದು ಆನೇಮಹಲನ ಮೋಹನ ಎಂಬುವರ ಜೊತೆಗೆ ಮದುವೆ ಮಾಡಿಸಿದ್ದರು.

ಮದುವೆಯಾದ ಎರಡೇ ದಿನದಲ್ಲಿ ಈ ದುರಂತ ಸಂಭವಿಸಿದೆ. ಮೋಹನ ಪತ್ನಿ ಹೆರಿಗೆ ನೋವಿನಲ್ಲಿ ಮೃತಪಟ್ಟಿದ್ದರು. ಹೀಗಾಗಿ ಇವರಿಗೂ ಇದು ಎರಡನೇ ಮದ್ವೆಯಾಗಿತ್ತು. ಈ ಘಟನೆ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!