ತಾಯಿಯನ್ನು ನಿಂದಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ವಿಜಯಪುರದಲ್ಲಿ ಮಗನ ಹತ್ಯೆ

465

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ತಾಯಿಯನ್ನು ನಿಂದಿಸಿರುವುದನ್ನ ಪ್ರಶ್ನೆ ಮಾಡಲು ಹೋದ ಯುವಕನನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೋಳಿ ಮಾಂಸ ಕತ್ತರಿಸುವ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಖತಿಜಾಪುರ ಗ್ರಾಮದಲ್ಲಿ ನಡೆದಿದೆ.

ಆರೋಪಿ ಖಾಜಲ್

22 ವರ್ಷದ ಇಸ್ಮಾಯಿಲ ಮುಲ್ಲಾ ಕೊಲೆಯಾದ ದುರ್ದೈವಿ. ಖಾಜಲ ಬೇಪಾರಿ ಕೊಲೆ ಮಾಡಿದ ಆರೋಪಿ ಎನ್ನಲಾಗ್ತಿದೆ. ಇಸ್ಮಾಯಿಲ್ ತಾಯಿಗೆ ಖಾಜಲ್ ಅವಾಚ್ಯ‌ ಶಬ್ದಗಳಿಂದ ಬೈಯ್ದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ.

ಘಟನೆ ವೇಳೆ ಇಸ್ಮಾಯಿಲ್ ಹಾಗೂ ಖಾಜಲ್ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಖಾಜಲ್ ಚಿಕನ್ ಅಂಗಡಿಯಲ್ಲಿನ ಚಾಕು ತೆಗೆದುಕೊಂಡು ಬಂದು ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಈ  ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!