ಪ್ರಜಾಸ್ತ್ರ ಸುದ್ದಿ
ಕಲಬುರಗಿ: ಸಂಸದ ಉಮೇಶ್ ಜಾಧವ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಸಂಸದರು ಇಂದು ತಿರುಗೇಟು ನೀಡಿದ್ದಾರೆ. ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಂಸದ ಜಾಧವ, ಮೊದಲ ಬಾರಿಗೆ ಶಾಸಕರಾದರೂ ಸಚಿವರಾಗುತ್ತಾರೆ. ಎರಡನೇ ಬಾರಿ, 3ನೇ ಬಾರಿ ಗೆದ್ದಾಗಲೂ ಸಚಿವರಾಗುತ್ತಾರೆ. ಅವರು ಸ್ಪೆಷಲ್ ಬೇಬಿ ಆಫ್ ಕರ್ನಾಟಕ ಎಂದು ವಾಗ್ದಾಳಿ ನಡೆಸಿದರು.
ನೀವು ಅಮೆರಿಕಕ್ಕೆ ಹೋದರೆ ನಮಗೇನು ಬ್ಯಾನಿ ಇಲ್ಲ. ಕಲಬುರಗಿ ನಿಮ್ಮ ದೃಷ್ಟಿಯಲ್ಲಿ ಇರಲಿ. ನಿಮ್ಮನ್ನು ನೀವು ಮೋದಿಗೆ ಹೋಲಿಕೆ ಮಾಡಿಕೊಳ್ಳುತ್ತೀರಿ. ಮೋದಿಗಿಂತ ಸೂಪರ್ ಆಗರಿ. ನಮ್ಮದು ತಕರಾರು ಇಲ್ಲ. ಸುಮ್ನೆ ಹೋಗಿ ಬರಬೇಡಿ. ಬಂಡಾವಳ ತನ್ನಿ ಎಂದು ಕಿಡಿ ಕಾರಿದರು.
ಅವರ ತಂದೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ಕಲಬುರಗಿ ಆಳುತ್ತಿದ್ದಾರೆ. ಇಲ್ಲಿ ಯಾವುದೇ ಕಾಲೇಜು ತೆರೆದಿಲ್ಲ. ಪ್ರಿಯಾಂಕ್ ಖರ್ಗೆ ಜೀ ನಿಜವಾಗಲೂ ರಾಜಕಾರಣಿಯಾಗಿದ್ದರೆ ನಿನ್ನೆ ಬಂದಾಗಲಾದರೂ ಆಶ್ರಯ ಕಾಲೋನಿಗೆ ಹೋಗಬೇಕಿತ್ತು. ಬಡವರ ಕಷ್ಟ ನಿಮಗೆ ಗೊತ್ತಿಲ್ಲ. ನನಗೆ ಗೊತ್ತು ಎಂದು ವಾಗ್ದಾಳಿ ನಡೆಸಿದರು.