‘ನಾನು ಮೊದ್ಲೇ ನಾಗರಾಜ ಕೆಣಕಿದ್ರೆ ಕಚ್ಚೋದು ಗ್ಯಾರೆಂಟಿ’

433

ಹೊಸಕೋಟೆ: ನನ್ನ ಹೆಸರು ಮೊದ್ಲೇ ನಾಗರಾಜ. ನನ್ನನ್ನ ಕೆಣಕಿದ್ರೆ ಕಚ್ಚೋದು ಗ್ಯಾರೆಂಟಿ ಎಂದು ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ ತಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೊಸಕೋಟೆಯಲ್ಲಿ ಮಾತ್ನಾಡಿರುವ ಅವರು, ಕೆಟ್ಟ, ಸುಳ್ಳು ರಾಜಕೀಯದಿಂದ ಬೇಸರವಾಗಿದೆ. ದೊಡ್ಡವರ ಬಗ್ಗೆ ಹೇಳಿದ್ರೆ ರಾಜಕೀಯ ಕಥೆ ಮುಗಿಯುತ್ತೆ. ನಾನು ದೇವರು ಮತ್ತು ಮತದಾರರಿಗೆ ಭಯ ಬೀಳುತ್ತೇನೆ ಹೊರ್ತು ಯಾರಿಗೂ ಅಲ್ಲವೆಂದು ಹೇಳಿದ್ದಾರೆ.

ಐಟಿ ಇಲಾಖೆ ದಾಳಿಗೆ ಭಯ ಬಿದ್ದ ರಾಜೀನಾಮೆ ನೀಡಿಲ್ಲ. ಕೆಲವರು ಲೂಟಿ ಮಾಡಿರುವ ದಾಖಲೆ ನನ್ನ ಬಳಿಯಿದೆ. ಅನೇಕ ಸಲ ಸಚಿವರಾದವರು ಲೂಟಿ ಮಾಡಿದ್ದಾರೆ. ಅವರೆಲ್ಲರ ದಾಖಲೆ ನನ್ನ ಬಳಿಯಿದೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!