ಪ್ರಜಾಸ್ತ್ರ ಸುದ್ದಿ
ಮುಂಬೈ: ಮುಂಬೈನಿಂದ ಗೋವಾಕ್ಕೆ ಹೊರಟಿದ್ದ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದೆ ಅನ್ನೋ ಆರೋಪದ ಮೇಲೆ ಶಾರೂಖ್ ಪುತ್ರ ಆರ್ಯನ್ ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ. ಇದರ ತನಿಖೆಯ ನೇತೃತ್ವ ವಹಿಸಿಕೊಂಡಿರುವ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಕೇಡ್ ವಿರುದ್ಧ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ನವಾಬ್ ಮಲ್ಲಿಕ್, ಮಾನಹಾನಿ ಆಗುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಂಕೇಡ್ ಸಹೋದರಿ ಯಾಸ್ಮೀನ್ ದೂರು ನೀಡಿದ್ದಾರೆ.
ಸಮೀರ್ ವಾಂಕೇಡ್ ಕುಟುಂಬ ಸಮೇತ ಮಾಲ್ಡೀವ್ಸ್ ಗೆ ಹೋಗಿದ್ದರು. ಈ ಬಗ್ಗೆ ಮಾತನಾಡಿರುವ ಸಚಿವ ನವಾಬ್ ಮಲ್ಲಿಕ್, ಹಣ ಸುಲಿಗೆ ಮಾಡಿಯೇ ಪ್ರವಾಸಕ್ಕೆ ಹೋಗಿದ್ದಾರೆ ಎಂದು ಆರೋಪಿಸಿದ್ದರು. ಅಲ್ದೇ, ಸೋಷಿಯಲ್ ಮೀಡಿಯಾದಲ್ಲಿನ ಅವರ ಫೋಟೋಗಳನ್ನು ಮೀಡಿಯಾಗಳಿಗೆ ಬಿಡುಗಡೆ ಮಾಡುವ ಮೂಲಕ ಮಾನ ಹಾನಿ ಮಾಡಿದ್ದಾರೆ ಎಂದು ಯಾಸ್ಮೀನ್ ದೂರು ನೀಡಿದ್ದಾರೆ.
ಇನ್ನು ಸಮೀರ್ ವಾಂಕೇಡ್ ಪತ್ನಿ ಕ್ರಾಂತಿ ರೆದ್ಕರ್ ವಾಂಕೇಡ್, ಮುಖ್ಯಮಂತ್ರಿ ಠಾಕ್ರೆಗೆ ಪತ್ರ ಬರೆದಿದ್ದಾರೆ. ಅಲ್ದೇ, ಪತ್ರವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಅದನ್ನು ಸಿಎಂಗೆ ಟ್ಯಾಗ್ ಮಾಡಿದ್ದಾರೆ. ತಮ್ಮ ಕುಟುಂಬದ ಮೇಲೆ ನಡೆಯುತ್ತಿರುವ ದಾಳಿಗೆ ರಕ್ಷಣೆ ಕೊಡಿ ಎಂದಿದ್ದಾರೆ.